PRABHU RATHOD ARTIST

9.27.2016

ಪ್ರಭು ಆರ್. ರಾಠೋಡ

ಪ್ರಭು ಆರ್. ರಾಠೋಡ

ಜನ್ಮ: ಗೌರ ತಾಂಡಾ, ತಾ.ಬಸವಕಲ್ಯಾಣ, ಜಿ.ಬೀದರ,
ಜನ್ಮದಿನಾಂಕ: 20/7/1973
ಶಿಕ್ಷಣ: ನಾಸಿಕ್ (ಮಹಾರಾಷ್ಟ್ರ)                                                                           


ಪದವಿ: ಜಿ.ಡಿ. (ಆರ್ಟ್) ಡಿ.ಪಿ.ಎಡ್, ಫೈನ್ ಆರ್ಟ್. (ಎಂ.ಎಚ್.)
ಹವ್ಯಾಸ: ಚಿತ್ರಕಲೆ, ಮಾಡರ್ನ್ ಆರ್ಟ್ ನಲ್ಲಿ ಹೊಸದನ್ನು ಕ್ರೀಯೇಟ್ ಮಾಡುವುದು. ಪೆಂಟಿಂಗ್ ರಚನೆ
   ಪುರಸ್ಕಾರಗಳು: ಉತ್ತಮ ಚಿತ್ರ ರಚನೆಯಲ್ಲಿ ರಾಷ್ಟ್ರಮಟ್ಟದ ಖ್ಯಾತಿ. ಇವರಿಗೆ ಮಹಾರಾಷ್ಟ್ರದ ರಾಜ್ಯಮಟ್ಟದ ಪುರಸ್ಕಾರ ದೊರೆತಿದೆ. ಇವರ ನಿಸರ್ಗ ಚಿತ್ರಣಕ್ಕೆ ಸರ್ಕಾರಿ ಕಾಲೇಜು ಔರಂಗಾಬಾದ್, ಬೀಡ್ ಜಿಲ್ಲಾ ಕಲಾ ಮತ್ತು ಕ್ರೀಡಾ ಅಕಾಡೆಮಿ, ಸಹ್ಯಾದ್ರಿ ಸ್ಕೂಲ್ ಆಫ್ ಆರ್ಟ್ ಪುರಸ್ಕಾರ ದೊರೆತಿದೆ. ಬಸವಕಲ್ಯಾಣದಲ್ಲಿ 2016 ನೇ ಆಗಸ್ಟ್ ತಿಂಗಳಲ್ಲಿ ವಿಶ್ವ ಬಸವ ಧರ್ಮ ವಿಶ್ವಸ್ಥ ಮಂಡಳಿಯಿಂದ ಆಯೋಜಿಸಿದ್ದ 'ಮನೆಗೊಂದು ಅನುಭವ ಮಂಟಪ' ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಮಾಡಲಾಗಿದೆ. ಕಲಾಶ್ರೀ ಆರ್ಟ್ ಮತ್ತು ಕ್ರಾಫ್ಟ್ ಕಾಲೇಜು ಸಂಗಮನೇರ್ (ನಿಸರ್ಗ ಚಿತ್ರಣ) ಲೋಕಮಾನ್ಯ ತಿಲಕ್ ಕೆ.ಬಿ.ಬಿ.ಓಕ್ ಸಮೃದ್ಧಿ ಪುಣೆ, ಡಾ.ಬಾಬಾಸಾಹೇಬ್ ದೇಶಮುಖ ಆರ್ಟ್ ಅಕಾಡೆಮಿ ಅಮರಾವತಿ, ಆರ್ಟ್ ಕಾಲೇಜ್ ನಾಸಿಕ್ (ಮಾಡರ್ನ್ ಆರ್ಟ್) ಮುದ್ರಕಲಾನಿಕೇತನ ವಾಸಿ ಮುಂಬೈ (ಪೋರ್ಟರೇಟ್) ಸೌಥ್ ಸೆಂಟ್ರಲ್ ಝೋನ್ ನಾಗಪೂರ, ಮಾಸ್ಟರ್ ದಿನಾನಾಥ ಮಂಗೇಶಕರ ಮಹಾವಿದ್ಯಾಲಯ (ಲ್ಯಾಂಡಸ್ಕೇಪ್) ಜೆ.ಜೆ.ಸ್ಕೂಲ್ ಆಫ್ ಆರ್ಟ್ ಮುಂಬೈ (ಲ್ಯಾಂಡಸ್ಕೇಪ್) ನಿಗೋರಾವೋ ಯುನಿವರ್ಸಿಟಿ ಜಪಾನ್ ದಿಂದ ಪುರಸ್ಕಾರಗಳು ದೊರೆತಿವೆ.
   ಚಿತ್ರಕಲಾ ಪ್ರದರ್ಶನ: ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಗ್ರೂಪ್ ಪ್ರದರ್ಶನದಲ್ಲಿ ಭಾಗಿ, ಕಲಾ ಅಕಾಡೆಮಿ ನವದೆಹಲಿಯ ಪ್ರದರ್ಶನದಲ್ಲಿ ಭಾಗಿ. ಮುಂಬೈ, ಪುಣೆ, ನಾಸಿಕ್, ಗುಜರಾತ, ಕೊಲ್ಕತ್, ಗೋವಾ ಇತ್ಯಾದಿ ಸ್ಥಳಗಳಲ್ಲಿ ಚಿತ್ರಕಲಾ ಪ್ರದರ್ಶನ.
  ಕಲಾಕೃತಿ ಸಂಗ್ರಹ: ವಿವಿಧ ಕಂಪೆನಿಗಳಲ್ಲಿ, ಆಸ್ಪತ್ರೆ, ಎಚ್.ಡಿ.ಎಫ್.ಸಿ ಮತ್ತು ಐಸಿಐಸಿಐ ಬ್ಯಾಂಕ್, ಸಂಸ್ಥೆಗಳಲ್ಲಿ, ಸೈನಿಕ ಅಕಾಡೆಮಿಯಲ್ಲಿ, ವಿಮಾನ ನಿಲ್ದಾಣಗಳಲ್ಲಿ, ನಾಸಿಕ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಅನೇಕ ಆರ್ಟ್ ಗ್ಯಾಲರಿಗಳಲ್ಲಿ, ಮನೆಗಳಲ್ಲಿ ಮತ್ತು ವೈಯಕ್ತಿಕ ಸಂಗ್ರಹಗಳಲ್ಲಿ ಹಾಗೂ ವಿದೇಶಗಳಲ್ಲಿ ಕಲಾಕೃತಿಗಳ ಸಂಗ್ರಹವಿದೆ.
ಮೊಬೈಲ್ ಸಂಖ್ಯೆ - 7760175561


ಹುಸೇನ್ ಪ್ರಭಾವ: ಇವರ ಚಿತ್ರಕಲಾಕೃತಿಗಳಲ್ಲಿ ಪ್ರಸಿದ್ಧ ಚಿತ್ರಕಲಾವಿದ ಎಂ.ಎಫ್.ಹುಸೇನ್ ಮತ್ತು ಪಿಕಾಸೋ ಅವರ ಪ್ರಭಾವವನ್ನು ಕಾಣಬಹುದು. ಪ್ರಭು ರಾಠೋಡ ದೇಶವಿದೇಶಗಳಲ್ಲಿ ಬೇಡಿಕೆ ಇರುವಂಥ ಅತ್ಯುತ್ತಮ ಕಲಾಕೃತಿಗಳನ್ನು ರಚಿಸುವ ಚಿತ್ರಕಲಾವಿದರು. ಎಲೆಮರೆಯ ಕಾಯಿಯಂತಿರುವ ಮತ್ತು ಸದ್ದಿಲ್ಲದೆ ಸಾಧನೆ ಮಾಡುವ ಅಪರೂಪದ ವ್ಯಕ್ತಿ. ಸಾಂಪ್ರದಾಯಿಕ ಚಿತ್ರಕಲೆ, ನವ್ಯ ಕಲೆ, ಭಾವಚಿತ್ರ, ನಿಸರ್ಗ ಚಿತ್ರಣದಲ್ಲಿ ಇವರದ್ದು ಎತ್ತಿದ ಕೈ. ಪೆನ್ಸಿಲ್ ನಿಂದ ಮೊದಲು ಗೆರೆ ಎಳೆಯದೆ ನೇರವಾಗಿ ಬ್ರಷ್ ಹಿಡಿದು ಬಣ್ಣಗಳನ್ನು ಉಪಯೋಗಿಸಿ ಕಲಾಕೃತಿ ರಚಿಸುತ್ತಾರೆ. ಕಣ್ಣಿಗೆ ರಾಚುವಂತ ಗಾಢ ಬಣ್ಣದ ಬಳಕೆ ಇವರ ವಿಶೇಷತೆ. ಚಿತ್ರಗಳಲ್ಲಿ ಚಲನಶೀಲತೆ ಇದೆ. ಕುದುರೆಗಳ ಓಟ, ಮನುಷ್ಯರು ಬರೀ ಕುಳಿತುಕೊಳ್ಳದೆ ಏನಾದರೂ ಕೆಲಸ, ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತದೆ. ಮುಂಬೈ, ನಾಸಿಕ್, ಬೆಂಗಳೂರು, ಪುಣೆ ಮುಂತಾದೆಡೆ ಇವರ ಕಲಾಕೃತಿಗಳ ಪ್ರದರ್ಶನ ನಡೆದಿದೆ. 400 ಕ್ಕೂ ಅಧಿಕ ಚಿತ್ರಗಳು ಮಾರಾಟವಾಗಿವೆ. ಕೆಲ ಪ್ರಸಿದ್ಧ ಲೇಖಕರ ಪುಸ್ತಕಗಳ ಮುಖಪುಟಗಳನ್ನು ರಚಿಸಿದ್ದಾರೆ. ಸಾವಿರ ಅಡಿ ಉದ್ದದ ಬಟ್ಟೆಯಲ್ಲಿ ಸ್ವಾಮಿ ವಿವೇಕಾನಂದರ ಕುರಿತಾದ ಜೀವನ ಚಿತ್ರಣವನ್ನು (ಸಿರೀಜ್) ಮಾಡಿದ್ದಾರೆ.

ಗೌರ ತಾಂಡಾ ಮತ್ತು ಬಸವಕಲ್ಯಾಣದಲ್ಲಿ ವಾಸಿಸುತ್ತಾರೆ. ಇವರ ಕಲಾಕೃತಿಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ಸತತವಾಗಿ ಕಲಾಕೃತಿಗಳನ್ನು ರಚಿಸುವಲ್ಲಿ ನಿರತರಾಗಿರುತ್ತಾರೆ. ಆನ್ ಲೈನ್ ಮೂಲಕ ಕಲಾಕೃತಿಗಳನ್ನು ಮಾರಾಟ ಮಾಡುತ್ತಾರೆ. ದೇಶದ ವಿವಿಧ ವೆಬ್ ಸೈಟ್ ಗಳಲ್ಲಿ ಇವರ ಕುರಿತಾದ ಮಾಹಿತಿ (ಬಯೋಡಾಟಾ) ಹಾಗೂ ಚಿತ್ರಗಳ ಮಾಹಿತಿ ಇದೆ. ಬೆಂಗಳೂರು, ಹೈದರಾಬಾದ್, ಮುಂಬೈ ಮುಂತಾದೆಡೆಯ ಗ್ಯಾಲರಿಗಳಲ್ಲಿಯೂ ಇವರ ಪೆಂಟಿಂಗ್ ಗಳು ಮಾರಾಟಕ್ಕೆ ಲಭ್ಯ ಇವೆ. ಇವರು ನಾಸಿಕ್ ನಲ್ಲಿ ಚಿತ್ರಕಲಾ ಶಿಕ್ಷಣ ಪೊರೈಸಿ ಜಿ.ಡಿ.(ಆರ್ಟ್) ಡಿ.ಪಿ.ಇಡಿ ಪದವಿ ಪಡೆದಿದ್ದಾರೆ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಪ್ರಭು ರಾಠೋಡ ಅತ್ಯುತ್ತಮ ಚಿತ್ರಕಲಾವಿದರು. ಇವರಿಗೆ ಉಜ್ವಲ ಭವಿಷ್ಯವಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಇವರ ಚಿತ್ರಕಲಾ ಶಿಕ್ಷಕರಾದ ದಿನಕರ ಜಾನಮಾಳಿ, ಎಸ್.ಎಸ್.ಸಿಂಧೆ ಮತ್ತು  ಶಿವಾಜಿ ತುಪೆ ಅವರ ಅಚ್ಚುಮೆಚ್ಚಿನ ಶಿಷ್ಯ ಇವರಾಗಿದ್ದಾರೆ. 


ಚಿತ್ರಕಲಾಕೃತಿ

ಚಿತ್ರಕಲಾಕೃತಿ

 

 

ಚಿತ್ರಕಲಾ ಪ್ರದರ್ಶನದ ಫೋಟೊ

ಚಿತ್ರಕಲಾ ಪ್ರದರ್ಶನದ ಫೋಟೊ

 

ಕಲಾವಿದರ ಭೇಟಿ ಮತ್ತು ಸನ್ಮಾನ

ಕಲಾವಿದರ ಭೇಟಿ ಮತ್ತು ಸನ್ಮಾನ